ದೇಶವೆಂದರೆ

ಜೀವವೆಂದರೆ ಬರಿ ಒಡಲು ಅಲ್ಲ
ಒಡಲಿಲ್ಲದೆ ಜೀವವು ಇಲ್ಲ
ಒಡಲು ಜೀವಗಳ ಸಂಬಂಧವೇ
ಜೀವನಾನುಬಂಧ
ಅದು ಎನಿತು ಸುಂದರ

ಫಲವೆಂದರೆ ಬರಿ ವೃಕ್ಷವಲ್ಲ
ವೃಕ್ಷವಿಲ್ಲದೆ ಫಲವು ಇಲ್ಲ
ವೃಕ್ಷ ಫಲಗಳ ಸಂಬಂಧವೇ
ಜೀವನಾನುಬಂಧ
ಅದು ಎನಿತು ಸುಂದರ

ಅರ್ಥವೆಂದರೆ ಬರಿ ವಾಕ್ಯವಲ್ಲ
ವಾಕ್ಯವಿಲ್ಲದೆ ಅರ್ಥವು ಇಲ್ಲ
ವಾಗರ್ಥ ಸಂಬಂಧ
ಅದು ಎನಿತು ಸುಂದರ

ದಯೆಯೆಂದರೆ ಬರಿ ದಾನವಲ್ಲ
ದಾನವಿಲ್ಲದೆ ದಯೆಯು ಇಲ್ಲ
ದಾನ ದಯೆಗಳ ಸಂಬಂಧ
ಅದು ಎನಿತು ಸುಂದರ

ಪ್ರೀತಿಯೆಂದರೆ ಬರಿ ನೀತಿಯಲ್ಲ
ನೀತಿಯಿಲ್ಲದೆ ಪ್ರೀತಿಯು ಇಲ್ಲ
ನೀತಿ ಪ್ರೀತಿಗಳ ಸಂಬಂಧ
ಅದು ಎನಿತು ಸುಂದರ

ಜ್ಞಾನವೆಂದರೆ ಬರಿ ಯೋಗವಲ್ಲ
ಯೋಗವಿಲ್ಲದೆ ಜ್ಞಾನವು ಇಲ್ಲ
ಯೋಗ ಜ್ಞಾನ ಸಂಬಂಧ
ಅದು ಎನಿತು ಸುಂದರ
*****

One thought on “0

  1. ತಿರುಮಲೇಸರು ಮಾಡುವ ಹಲ ಕೆಲವು ಪ್ರಯೋಗಗಳಲ್ಲಿ ಈ ಕವಿತೆಯೂಒಂದು. ಸಾಮಾನ್ಯ ವಸ್ತುವನ್ನು ಕಾವ್ಯಮಯವಾಗಿ ನೋಡುವ,ಅನೇಕ ಒಳಾರ್ಥಗಳನ್ನು ಪ್ತಿಪಾದಿಸುವ ಅವರ ಅನೇಕ ಕವಿತೆಗಳಲ್ಲಿ ಇದೂ ಒಂದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೫
Next post ಲೋಕದ ರೀತಿ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys